Ad Code

ಏ. 21 ರಿಂದ 23 ನಿಲೇಕಣಿ ಗಣೇಶ ಮಂದಿರದ 25 ನೇ ವರ್ದಂತಿ ಉತ್ಸವ

ಶಿರಸಿ: ನಿಲೇಕಣಿಯ ಶ್ರೀ ಗಣೇಶ ಮಂದಿರದ 25 ನೇ ವರ್ದಂತಿ ಉತ್ಸವ ಏ. 21 ರಿಂದ 23 ರ ವರೆಗೆ ನಡೆಯಲಿದೆ. ವೈಶಾಖ ಶುಕ್ಲ ಪಾಡ್ಯ ಶುಕ್ರವಾರ ದಿನಾಂಕ 21-04-2023 ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ ಉತ್ಸವ, ಸಂಕಲ್ಪ ಋತ್ವಿಧ್ವರ್ಣನೆ, ಆಭರಣ ಪಲಿಗ್ರಹ, ಅಗ್ನೋತ್ತಾರಣಪೂರ್ವಕ ಶುದ್ದಿ, ಅಥರ್ವ ಶೀರ್ಷ ಹವನ, ಸತ್ಯ ಗಣಪತಿ ಕಥೆ, ಮಹಾಮಂಗಳಾರತಿ. ವೇ|| ಮೂ ವಿದ್ವಾನ ಗಣಪತಿ ಭಟ್ಟ, ಕಿಬ್ಬಳ್ಳಿ, ಶಿರಸಿ ಇವರಿಂದ ಆಶೀರ್ವಚನ ನಂತರ ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ವಾಸ್ತು ರಾಕ್ಷೋಘ್ನ ಹೋಮ, ಬಲಿ, ಕಲಶ ಸ್ಥಾಪನೆ ಪೂಜೆ, ಅಧಿವಾಸ 

ಶನಿವಾರ 22-04-2023 ರಂದು ಶ್ರೀ ದೇವರ ವರ್ಧಂತಿ ಉತ್ಸವ, ಕಲಾಭಿವೃದ್ಧಿ ಹೋಮ, ಸತ್ಯನಾರಾಯಣ ಕಥೆ ಮಹಾಪೂಜೆ, ವೇ| ಮೂ| ವಿದ್ವಾನ ಕುಮಾರ ಭಟ್ಟ ಕೋಳಗಿಬೀಸ ಇವರಿಂದ ಆಶೀರ್ವಚನ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಾಯಂಕಾಲ ಪಲ್ಲಕ್ಕಿ ಉತ್ಸವ, ರಾಜೋಪಚಾರ ಸೇವೆ, ಅಷ್ಟಾವಧಾನ ಸೇವೆ. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. 

ರವಿವಾರ ದಿನಾಂಕ 23-04-2023 ರಂದು ಬೆಳಿಗ್ಗೆ ಗಣಹವನ, ಅಥರ್ವ ಶೀರ್ಷ ಹೋಮ, ಪೂರ್ಣಾಹುತಿ, ಮಹಾಪೂಜೆ ವೇ|| ಮೂ ವಿದ್ವಾನ ಶ್ರೀನಿವಾಸ ಭಟ್ಟ, ಮಂಜುಗುಣಿ ಇವರಿಂದ ಆಶೀರ್ವಚನ ನಂತರ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಸಾಯಂಕಾಲ ಶ್ರೀ ದೇವರ ಪಲ್ಲಕ್ಕಿ ಗ್ರಾಮೋತ್ಸವ ನಡೆಯಲಿದೆ.

              

3 ದಿನದ ಸಾಂಸ್ಕೃತಿಕ ಕಾರ್ಯಕ್ರಮ

21-04-2023 ಶುಕ್ರವಾರ ಸಾಯಂಕಾಲ 6 ರಿಂದ 8 ಘಂಟೆಗೆ ಭಜನೆ ಶಾಲಾ ಮಕ್ಕಳಿಂದ ಕಾರ್ಯಕ್ರಮ ರಾತ್ರಿ 8 ರಿಂದ 10 ಘಂಟೆ ನಂತರ ಕುಮಾರಿ ತುಳಸಿ ಹೆಗಡೆ ಇವರಿಂದ ಯಕ್ಷ ನೃತ್ಯ ರೂಪಕ

22-04-2023 ಶನಿವಾರ ಸಾಯಂಕಾಲ 6 ರಿಂದ 8 ಘಂಟೆಗೆ ಭಜನೆ, ಶಾಲಾ ಮಕ್ಕಳಿಂದ ಕಾರ್ಯಕ್ರಮ ರಾತ್ರಿ 8 ರಿಂದ 10 ಘಂಟೆ ನಂತರ ನಾಟಕ ಪ್ರದರ್ಶನ : ಮೂರು ಮುತ್ತುಗಳು ತಂಡ ಕುಂದಾಪುರ

23-04-2023 ಶನಿವಾರ ಸಾಯಂಕಾಲ 6 ರಿಂದ 8 ಘಂಟೆಗೆ ಭಜನೆ ಶಾಲಾ ಮಕ್ಕಳಿಂದ ಕಾರ್ಯಕ್ರಮ ರಾತ್ರಿ 8 ರಿಂದ 10 ಘಂಟೆ ನಂತರ ಝಂಕಾರ ಮೆಲೋಡಿಸ್‌ ಭಟ್ಕಳ ಇವರಿಂದ ಸಂಗೀತ ತಾರ್ಯಕ್ರಮ ನಡೆಯಲಿದೆ.


Post a Comment

0 Comments