Ad Code

ಜೇನಿಲ್ಲದಿದ್ದರೆ ಏನು ಇಲ್ಲ!

ಅಲ್ಬರ್ಟ್ ಐನ್ ಸ್ಟೀನ್ ಒಂದು ಮಾತನ್ನು ಹೇಳುತ್ತಾನೆ. ಜೇನುನೊಣ ಪ್ರಪಂಚದಲ್ಲಿ ಇಲ್ಲದಿದ್ದರೆ ಮಾನವನ ಜೀವನ ಕೇವಲ ನಾಲ್ಕು ವರ್ಷದಲ್ಲಿ ಅಂತ್ಯವಾಗುತ್ತದೆ. ಅವರ ಮಾತೇ ಜೇನಿನ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. 

ಸುಟ್ಟ ಗಾಯಗಳಿಗೆ ತಂಪು ಮಾಡಲು ಜೇನು ಉತ್ತಮ ಔಷಧಿ. ಜೇನು ತುಪ್ಪವನ್ನು ನಿರಂತರ ಸೇವಿಸುತ್ತಿದ್ದಲ್ಲಿ ಬುದ್ಧಿ ಚುರುಕಾಗುತ್ತದೆ. ಬೊಜ್ಜು ಕರಗಿಸಲು ಜೇನು ಉತ್ತಮ ಆಹಾರ. ಜಠರ ಸಂಬಂಧಿ ಕಾಯಿಲೆ, ಕರುಕನ ಹುಣ್ಣಿಗೆ ಜೇನು ಸಿದ್ಧೌಷಧ. ಮೂತ್ರಪಿಂಡಗಳ ಬಾವು, ಕಲ್ಲುಗಟ್ಟುವಿಕೆ, ಮೂತ್ರದ್ವಾರವು ಸಣ್ಣದಾಗುವುದು, ಈ ಮುಂತಾದ ರೋಗಗಳಿಗೆ ಜೇನು ತುಪ್ಪದ ಸೇವನೆಯು ಉತ್ತಮ

ಜೇನನ್ನು ಬೆಚ್ಚಗಿನ ಬಾರ್ಲಿ ನೀರಿನಲ್ಲಿ ಬೆರೆಸಿ ಸೇವಿಸುವುದರಿoದ ಮಲಬದ್ಧತೆ, ಅಜೀರ್ಣ, ಶ್ವಾಸಕೋಶ ಸಂಬಂಧಿ ತೊಂದರೆಗಳಾದ ದಮ್ಮು, ನೆಗಡಿ, ಕೆಮ್ಮು ಮತ್ತು ಗಂಟಲು ನೋವು ಗುಣವಾಗುತ್ತದೆ ಜೇನು ಮತ್ತು ನಿಂಬೆರಸದ ಸಮ ಪ್ರಮಾಣದ ಮಿಶ್ರಣವನ್ನು ಕಾಯಿಸಿ ಸೇವಿಸಿದರೆ ಕಫ ನಿವಾರಕವಾಗಬಲ್ಲದು

ಅಷ್ಟಲ್ಲದೇ ಜೇನು ಮೇಣ ಕೂಡ ತುಂಬಾ ಉಪಯುಕ್ತ

ಮೇಣದ ಹಾಳೆ (Comb foundation sheet) ಗಳನ್ನು ತಯಾರಿಸಲು ಬಳಸುತ್ತಾರೆ. ಕೋಲ್ಡ್ ಕ್ರಿಮ್‌ಗಳು, ಲೋಷನ್‌ಗಳು ಮತ್ತು ಮುಲಾಮು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ

ಮೇಣದಬತ್ತಿ, ಬಣ್ಣಗಳು, ತಯಾರಿಕೆಯಲ್ಲಿ ಬಳಸುತ್ತಾರೆ ವಾರ್ನಿಷ್ ಮತ್ತು ಪಾಲಿಶ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇನ್ಸುಲೇಟರ್ ಮತ್ತು ಕೀಲು ಎಣ್ಣೆಯಾಗಿ ಬಳಸುತ್ತಾರೆ ಗುಳಿಗೆಗಳ ಹೊರ ಕವಚ ತಯಾರಿಸಲು ಬಳಸುತ್ತಾರೆ ಇಂಕುಗಳು ಮತ್ತು ಡೈಗಳನ್ನು ತಯಾರಿಸಲು ಬಳಸುತ್ತಾರೆ.

ವಿಷಯ ಕೃಪೆ: ಸಾವಯವ ಕೃಷಿ ಸಂಶೋಧನಾ ಕೇಂದ್ರ ಶಿವಮೊಗ್ಗ


Post a Comment

0 Comments