ಯಾವಾಗಲೂ ನೆಗಡಿ ಆರದಿದ್ದರೆ:
ದಿನಾಲೂ ಬೆಳಿಗ್ಗೆ ಅಥವಾ ರಾತ್ರಿ ಮಲಗುವಾಗ, ಓಮ ಹಾಕಿ ಕುದಿಸಿದ ನೀರು ( ಅಜವಾನದ ನೀರು ಕುಡಿಯಲಿಕ್ಕೆ ಕೊಡಬೇಕು) ೩ ದಿವಸ
ಇಲ್ಲವೆ
ಅನ್ನ ಬಸಿದು ಗಂಜೀ ತಿಳಿ ತೆಗೆದು, ಅರ್ಧ ಸೇರು ತಿಳಿಗೆ ೨ ತೊಲೆ ಬೆಣ್ಣೆ ಹಾಕಿ ಕುಡಿಯಲಿಕ್ಕೆ ಕೊಡಬೇಕು. ೭ ದಿವಸ. ದಿನಕ್ಕೆರಡು ಸಾರೆ ಯಂತೆ ಕೊಡಬೇಕು.
ತಲೆಗೂದಲು ಉದುರಿದರೆ:
ಬೇಲಿ ಔಡಲ ಬೇರನ್ನು ಲಿಂಬೇರಸದಲ್ಲಿ ತೆಯ್ದು ದಿನಕ್ಕೆ ೩ ಸಾರೆಯಂತೆ ೯ ದಿವಸ ಹಚ್ಚಬೇಕು.
ಕೃಪೆ: ಅನುಭವಿಕ ವೈದ್ಯ
(ಅನುಭೂತ ಯೋಗ ಸಂಗ್ರಹ)
ಗ. ನೀ. ಪಟವರ್ಧನ
0 Comments